ಎಸ್ಎಸ್ ಎಲ್ ಸಿ ಪರೀಕ್ಷೆ ದಿನಾಂಕ ಸೋಮವಾರ ನಿಗದಿ ಮಾಡಲಾಗುವುದು :ಸಚಿವ ಸುರೇಶ ಕುಮಾರ್ ಹೇಳಿಕೆ.
|
SSLC ಪರೀಕ್ಷೆ ದಿನಾಂಕ ಸೋಮವಾರ ಪ್ರಕಟಿಸಲಾಗುವುದು. |
ಶಿಕ್ಷಣ ಸಚಿವ ಸುರೇಶ ಕುಮಾರ ಇವತ್ತು ಪತ್ರಕರ್ತ ರೊಂದಿಗೆ ಮಾತನಾಡಿ, ಎಸ್ ಎಸ್ ಎಲ್ ಸಿ ಪರೀಕ್ಷೆ ಬಗ್ಗೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಧವೀದರ ಪರಿಷತ್ ಸದ್ಯಸರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ಮಾಡಿ, ದಿನಾಂಕ ವನ್ನು ನಿಗದಿ ಮಾಡಲಾಗುವುದು ಅಂತಾ ಹೇಳಿದ್ದಾರೆ.
ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿ ಅಂತಾ ಬಹಳ ಜನ ಬೇಡಿಕೆ ಇಟ್ಟಿದು, ಇದರ ಬಗ್ಗೆ ನಿರ್ಧಾರ ಬಹಳ ಬೇಗ ಚರ್ಚೆ ಮಾಡಲಾಗುವುದು ಅಂತಾ ಸೂಚಿಸಿದ್ದಾರೆ.
ಇದಲ್ಲದೆ, ಮೇ 17 ರ ನಂತರದ ಲಾಕ್ ಡೌನ್ 4. ಮಾರ್ಗಸೂಚಿ ಮೇಲೆ ಅವಲಂಬಿತವಾಗಿದ್ದು
ಯಾವ ರೀತಿ ಶಿಕ್ಷಣ ಕ್ಷೇತ್ರಕ್ಕೆ ಸಡಲಿಕೆ ನೀಡಲಾಗುತ್ತೆ ಅನ್ನೋದರ ಮೇಲೆ ದಿನಾಂಕ ನಿಗದಿ ಆಗುವುದು.
SSLC ಪರೀಕ್ಷೆ ಗು ಮುಂಚೆ ಕನಿಷ್ಠ 10 ದಿನಗಳ ವರೆಗೆ ಪರೀಕ್ಷೆ ಸಿದ್ಧತೆ ನಡೆಸಲು ವಿದ್ಯಾರ್ಥಿಗಳಿಗೆ ರಿವಿಶನ್ ತರಗತಿ ನಡೆಸಲು ಶಾಲೆಗಳಿಗೆ ಕರೆಯ ಬೇಕಾಗುತ್ತೆ.
ತರಗತಿಗಳನ್ನು ಹಾಗೂ ಪರೀಕ್ಷೆ ನಡೆಸುವಾಗ ಬೇಕಾದ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳಲಾಗುವುದು ಅದಕೆ ತಕ್ಕ ಎಲ್ಲಾ ಸಿದ್ಧತೆ ಕರ್ನಾಟಕ ಸರ್ಕಾರ ಮಾಡಿಕೊಂಡಿದೆ ಅಂತಾ ಹೇಳಿದ್ದಾರೆ.
ಪರೀಕ್ಷೆ ಕೇಂದ್ರಗಳನ್ನು ಹೆಚ್ಚು ಮಾಡಿ, ಪ್ರತಿ ಕೊಠಡಿಯಲ್ಲಿ ಕಡಿಮೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಹಾಗೆ ಮಾಡಲಾಗುತ್ತೆ, ಮಾಸ್ಕ್ ಕಡ್ಡಾಯ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಲಾಗುವುದು.
ವಿದ್ಯಾರ್ಥಿಗಳ ಅರೋಗ್ಯ ಕೆ ಮೊದಲ ಆದ್ಯತೆ ನೀಡಿ ಪರೀಕ್ಷೆಯನ್ನು ಯಶಸ್ಸು ಮಾಡುವುದು ದೊಡ್ಡ ಸವಾಲಾಗಿದ್ದು ಅದನ್ನು ನಿರ್ವಹಿಸಲು ಬೇಕಾದ ಮುಂಜಾಗ್ರತೆ ಕ್ರಮ ಎಲ್ಲಾ ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಕೈಗೊಳಲಿದ್ದಾರೆ.
ಎಲ್ಲರೂ ಕಾದು ನೋಡೋಣ, ಸೋಮವಾರ ಸಚಿವರು, ಎಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಏನು ನಿರ್ಧಾರ ಕೈಗೊಳ್ಳುತ್ತಾರೆ ಅಂತಾ.
ಎಲ್ಲಾ ವಿದ್ಯಾರ್ಥಿಗಳಿಗೆ ನಮ್ಮ ಟೀಮ್ ಕಡೆಯಿಂದ ಪರೀಕ್ಷೆ ಸಿದ್ದತೆಗೆ all the best. 👍
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ